Tuesday, 28 April 2015


ವಿಶೇಷ ಶಿಕ್ಷಣ ಕ್ಷೇತ್ರದಲ್ಲಿನ ಪ್ರಮುಖ ಮೈಲಿಗಲ್ಲುಗಳು


 1.      Scheme of Integration Education for the Disabled Children (IEDC Scheme)

       

        ನ್ಯೂನತೆವುಳ್ಳ ಮಕ್ಕಳ ಸಮಗ್ರ ಶಿಕ್ಷಣ:
          
            ಭಾರತದಲ್ಲಿ ವಿಶೇಷ ಶಾಲೆಗಳು ನ್ಯೂನತೆವುಳ್ಳ ಮಕ್ಕಳ ಶಿಕ್ಷಣದಲ್ಲಿ ಬಹುಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತವೆ. ಆದರೆ ಈ ಶಾಲೆಗಳು ವಿಶೇಷ ಅಗತ್ಯತೆವುಳ್ಳ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಋಣಾತ್ಮಕ ಪರಿಣಾಮವನ್ನು ಬೀರಿ ಸಾಮಾನ್ಯ ಮಕ್ಕಳು ಮತ್ತು ವಿಶೇಷ ಅಗತ್ಯವುಳ್ಳ ಮಕ್ಕಳಲ್ಲಿ ಅಂತರ ಉಂಟುಮಾಡುತ್ತವೆ. ಸಮಗ್ರ ಶಿಕ್ಷಣದ ಕಲ್ಪನೆ ಪ್ರಪಂಚದ್ಯಾಂತ ಪ್ರಚಲಿದಲ್ಲಿದೆ ಭಾರತದ ಸನ್ನಿವೇಶಕ್ಕೂ ಇದು ಅತಿ ಮುಖ್ಯವಾಗಿ ಅಗತ್ಯವಾಗಿದೆ. ಇದಕ್ಕೆ ಕಾರಣ ಹಲವು – ಉತ್ತಮ ವ್ಯಾಪ್ತಿ, ಮಿತವ್ಯಯಕರ ಮತ್ತು ವಿಕಲಚೇತನ ಮಕ್ಕಳು ಸಾಮಾನ್ಯ ಮಕ್ಕಳ ಜೋತೆ ಬೆಳೆಯಲು ಅವಕಾಶ ದೊರೆಯುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 1974ರಲ್ಲಿ  IEDC ಯೋಜನೆ ಜಾರಿಗೆ ಬಂದಿತು.
          IEDC ಯೋಜನೆ ಪ್ರಾರಂಭವಾಗುವ ಮೊದಲು 1964ರಲ್ಲಿ ಭಾರತದ ಪ್ರಥಮ ಶಿಕ್ಷಣ ಆಯೋಗವಾದ ಕೋಠಾರಿ ಆಯೋಗವು ಇಲ್ಲಿಯವರೆಗೂ ಅತಿ ಕಡಿಮೆ ಪ್ರಮಾಣದಲ್ಲಿ ಈ ಕ್ಷೇತ್ರದಲ್ಲಿ ಕಾರ್ಯಗಳು ನಡೆದಿವೆ. ಶೈಕ್ಷಣಿಕವಾಗಿ ಮುಂದುವರೆದಿರುವ ದೇಶಗಳಿಂದ ನಾವು ಈ ಸಂಬಂಧವಾಗಿ ವಿಷಯಗಳನ್ನು ಕಲಿಯಬೇಕಾಗಿದೆಎಂದು ತನ್ನ ‘Towards Equalization of Opportunity’ ಅಧ್ಯಾಯದಲ್ಲಿ ಅಭಿಪ್ರಾಯ ಪಟ್ಟಿದೆ.
          1968ರ ರಾಷ್ಟ್ರೀಯ ಶಿಕ್ಷಣ ನೀತಿಯು ಸಹ ದೈಹಿಕ ವಿಕಲತೆಯನ್ನು ಮತ್ತು ಬುದ್ದಿಮಾಂದ್ಯರಿಗೆ ಶಿಕ್ಷಣ ಸೇವೆಗಳನ್ನು ವಿಸ್ತರಿಸಲು ಸೂಚಿಸಿದೆ. ಇದೆಲ್ಲದರ ಜೊತೆಗೆ ‘ಸಮಗ್ರ ಶಿಕ್ಷಣ’ ನೀಡುವುದರ ಮೂಲಕ ವಿಕಲಚೇತನರನ್ನು ಸಾಮಾನ್ಯ ಶಾಲೆಗಳಲ್ಲಿ ಮುಖ್ಯವಾಹಿನಿಗೆ ತರುವ ಅಶಯವನ್ನು ಹೊಂದಿತ್ತು. 1968ರ ರಾಷ್ಟ್ರೀಯ ಶಿಕ್ಷಣ ನೀತಿಯು ಬಂದ 6 ವರ್ಷಗಳ ನಂತರ ಭಾರತದಲ್ಲಿ IEDC ಯೋಜನೆ ಜಾರಿಗೆ ಬಂದಿತು.
          IEDC ಯೋಜನೆಯು ಕೇಂದ್ರ ಸರ್ಕಾರ ಪ್ರಯೋಜಿತ ಯೋಜನೆಯಾಗಿದ್ದು, ಸಾಮಾನ್ಯ ಶಾಲೆಗಳಲ್ಲಿ ಎಲ್ಲಾ ವಿಕಲಚೇತನರಿಗೂ ಶಿಕ್ಷಣ ಸೌಲಭ್ಯಗಳನ್ನು ನೀಡುವ ಗುರಿಯನ್ನು ಹೊಂದಿತ್ತು. ಮಕ್ಕಳು ವಿಶೇಷ ಶಾಲೆಗಳಿಂದ ಬರುವುದರಿಂದ ಅವರಲ್ಲಿ ಭಾಷೆ ಮತ್ತು ದೈನಂದಿನ ಕಾರ್ಯಗಳನ್ನು ಮಾಡಿಕೊಳ್ಳುವ ಸಾಮಾರ್ಥ್ಯವನ್ನು ಗಳಿಸಿಕೊಂಡಿರುತ್ತಾರೆ. ಅದ್ದರಿಂದ ಮಕ್ಕಳನ್ನು ಸುಲಭವಾಗಿ ಸಮನ್ವಯಗೊಳಿಸಬಹುದು ಎಂಬ ಆಶಯವನ್ನು ಈ ಯೋಜನೆ ಹೊಂದಿತ್ತು.
          ಈ ಯೋಜನೆಯು ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಶಾಲಾಪೂರ್ವ ತರಬೇತಿ, ತಂದೆ-ತಾಯಿಗಳಿಗೆ ಸಲಹೆ ಮತ್ತು ಮಾರ್ಗದರ್ಶನ, ವಿಕಲಚೇತನ ಮಕ್ಕಳಿಗೆ ವಿಶೇಷ ತರಬೇತಿ, ದೃಷ್ಟಿದೋಷವುಳ್ಳವರಿಗೆ ಚಲನವಲನ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಹೊಂದಿತ್ತು. ಈ ಯೋಜನೆಯು ಸಂಪನ್ಮೂಲ ಶಿಕ್ಷಕರ ಭತ್ಯೆ, ವಿದ್ಯಾರ್ಥಿಗಳಿಗೆ ಊಟ-ವಸತಿ-ಸಾರಿಗೆ ಭತ್ಯೆ, ವಾಚಕರ ಭತ್ಯೆ, ಸಾಧನ ಸಲಕರಣೆಗಳಿಗೆ ತಗಲುವ ವೆಚ್ಚ, ಸಮವಸ್ತ್ರ ಭತ್ಯೆ, ಕಟ್ಟಡಗಳನ್ನು ತಡೆರಹಿತಗೊಳಿಸಲು ತಗಲುವ ವೆಚ್ಚ, ಶಾಲೆಗಳಲ್ಲಿ ಸಂಪನ್ಮೂಲ ಕೊಠಡಿಗಳನ್ನು ಒದಗಿಸುವುದು ಮುಂತಾದ ವೆಚ್ಚಗಳನ್ನು ಭರಿಸುತ್ತದೆ.
          IEDC ಯೋಜನೆಯು ಮೂರು ದಶಕಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದು, 1992ರಲ್ಲಿ ಪರಿಷ್ಕೃತ ಯೋಜನೆ ಜಾರಿಗೆ ಬಂದಿತು. ಈ ಯೋಜನೆಯ ಮೂಲಕ 28 ರಾಜ್ಯಗಳ 150,000ರಷ್ಟು ವಿಕಲಚೇತನ ಮಕ್ಕಳಿಗೆ ಶಿಕ್ಷಣ ಸೌಲಭ್ಯಗಳನ್ನು ನೀಡಿತು. IEDC ಯೋಜನೆಯು ಶಿಕ್ಷಕರ, ಪೋಷಕರ, ಶೈಕ್ಷಣಿಕ ಆಡಳಿತ ವರ್ಗದವರ ಮನೋಧೋರಣೆಯಲ್ಲಿ ಬದಲಾವಣೆಯನ್ನು ತರುವ ಮೂಲಕ ಕ್ರಾಂತಿಯನ್ನೇ ಮಾಡಿತು.
          ಭಾರತ ಸರ್ಕಾರವು ವಿವಿಧ ಯೋಜನೆ ಮತ್ತು ಕಾನೂನುಗಳನ್ನು ಜಾರಿಗೊಳಿಸುವ ಹಾಗೂ ಜಾಲ್ತಿಯಲ್ಲಿದ್ದ ಕಾಯ್ದೆಗಳಲ್ಲಿ ಬದಲಾವಣೆಗಳನ್ನು ತರುವ ಮೂಲಕ ವಿಕಲಚೇತನರ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತಂದಿತು.
  • 1981ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು Assistance to Disabled Persons  for Purchase/Fitting of Aids and Applains (ADIP) ಯೋಜನೆಯನ್ನು ಜಾರಿಗೆ ತಂದಿತು. ಇದರ ಮೂಲಕ ವಿಕಲಚೇತನ ವ್ಯಕ್ತಿಗಳಿಗೆ ಸಾಧನ-ಸಲಕರಣೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಮುಖ್ಯವಾಹಿನಿಯಲ್ಲಿ ಮಗು ಯಶಸ್ವಿಯಾಗಲು ಸಾಧನ-ಸಲಕರಣೆಗಳ ಅವಶ್ಯಕತೆಯನ್ನು ಮನಗಂಡು ಈ ಯೋಜನೆಯನ್ನು ಜಾರಿಗೆ ತರಲಾಯಿತು.
  •   ಆಕಸ್ಮಿಕವೆಂಬಂತೆ ವಿಶ್ವಸಂಸ್ಥೆಯು 1981ರ ಈ ವರ್ಷವನ್ನು International year of Disabled Persons (IYDP) ಎಂದು ಘೋಷಿಸಿತು.
  •   1983-92ರ ದಶಕವನ್ನು ಸಂಯುಕ್ತ ಸಂಸ್ಥಾನಗಳ ಸಾಮಾನ್ಯ ಸಭೆ (UN General Assembly) ವಿಕಲಚೇತನರಿಗೆ ಮೀಸಲಿಡಲಾದ ದಶಕ ಎಂದು ಘೋಷಿಸಿತು. ಈ ದಶಕದಲ್ಲಿ ಭಾರತದಲ್ಲಿ ಹಲವಾರು ಯೋಜನೆಗಳು ಜಾರಿಗೆ ಬಂದವು.    
                                                                                      ಮುಂದುವರೆಯುವುದು...
  disable government scheme in Kannad

Friday, 10 April 2015


ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ವಿಧೇಯಕ 2014 ರ ಸಾರಾಂಶ
  •  ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ವಿಧೇಯಕ 2014, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮಂತ್ರಿಗಳಾದ ಮಲ್ಲಿಕಾರ್ಜುನ ಖರ್ಗೆಯವರಿಂದ 2013ರ ಫೆಭ್ರವರಿ 7 ರಂದು ರಾಜ್ಯಸಭೆಯಲ್ಲಿ ಮಂಡನೆಯಾಯಿತು.
  • ಈ ವಿಧೇಯಕವು 1995ರ ಅಂಗವಿಕಲ ವ್ಯಕ್ತಿಗಳ ಅಧಿನಿಯಮವನ್ನು ರದ್ದುಗೊಳಿಸುತ್ತದೆ.

  •       ವಿಕಲತೆಯ ವ್ಯಾಖ್ಯಾನ: ವಿಕಲತೆಯ ವ್ಯಾಖ್ಯಾನವು ಆಟಿಸಂ, ಅಲ್ಪ ದೃಷ್ಟಿ ಮತ್ತು ಅಂಧತ್ವ, ಸೆರೆಬ್ರಲ್ ಪಾಲ್ಸಿ, ಕಿವುಡು ಮತ್ತು ಅಂಧತ್ವ, ಹಿಮೊಫಿಲಿಯಾ, ಶ್ರವಣ ನ್ಯೂನತೆ, ಕುಷ್ಠರೋಗ, ಭೌದ್ದಿಕ ವಿಕಲತೆ, ಮಾನಸಿಕ ಅಸ್ವಸ್ಥ, ಮಸ್ಕೂಲಾರ್ ಡಿಸ್ಟ್ರೊಫಿ, ಬಹು ಪಾರ್ಶ್ವವಾಯು, ಕಲಿಕಾ ನ್ಯೂನತೆ, ವಾಕ್ ಮತ್ತು ಭಾಷಾ ವಿಕಲತೆ, ಸಿಕಲ್ ಸೆಲ್ ಅನಿಮಿಯಾ, ಥಲಸೇಮಿಯಾ, ತೀವ್ರತರ ನರಸಂಬಂಧಿತ ಸ್ಥಿತಿ ಮತ್ತು ಬಹುವಿಕಲತೆಯಂತಹ 19 ಸ್ಥಿತಿಗಳನ್ನು ಒಳಗೊಂಡಿದೆ. ಮೇಲೆ ನಮೂದಿಸಿರುವ ಯಾವುದಾದರೂ ವಿಕಲತೆಯು ಕನಿಷ್ಠ 40% ನಷ್ಟಿದ್ದರೆ ಅವರನ್ನು ಮಾನದಂಡಕ್ಕೆ ಒಳಪಟ್ಟ ವ್ಯಕ್ತಿಯೆಂದು (Persons with benchmark disabilities )  ವ್ಯಾಖ್ಯಾನಿಸುತ್ತದೆ.
  •         ವಿಕಲಚೇತನ ವ್ಯಕ್ತಿಗಳ ಹಕ್ಕು: ವಿಧೇಯಕವು ವಿಕಲಚೇತನ ವ್ಯಕ್ತಿ ಸಮಾನತೆಯ ಹಕ್ಕನ್ನು ಮತ್ತು ತಾರತಮ್ಯ ವಿರುಧ್ದದ ಹಕ್ಕನ್ನು ಘೋಷಿಸಿದೆ. ವಿಕಲಚೇತನ ವ್ಯಕ್ತಿಗಳ ಹಕ್ಕು, ಅಮಾನವೀಯ ವರ್ತನೆಗಳಿಂದ ರಕ್ಷಣೆ , ಸಮಾನ ರಕ್ಷಣೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ರಕ್ಷಣೆ, ಸಶಸ್ತ್ರ ಸಂಘರ್ಷಗಳು, ಮಾನವ ನಿರ್ಮಿತ ತುರ್ತು ಪರಿಸ್ಥಿತಿಗಳು ಮತ್ತು  ನೈಸರ್ಗಿಕ ವಿಕೋಪಗಳ ಸಂದರ್ಭಗಳಲ್ಲಿ ರಕ್ಷಣೆಯನ್ನು ಒದಗಿಸುವುದನ್ನು ಒಳಗೊಂಡಿದೆ. ಪ್ರಸ್ತುತದಲ್ಲಿರುವ ಎಲ್ಲಾ ಸಾರ್ವಜನಿಕ ಕಟ್ಟಡಗಳನ್ನು 5 ವರ್ಷಗಳಲ್ಲಿ ವಿಕಲಚೇತನರ ರಾಷ್ಟ್ರೀಯ ಅಯೋಗವು ರೂಪಿಸಿರುವ ನಿಯಮಗಳಂತೆ ವಿಕಲಚೇತನ ವ್ಯಕ್ತಿಗಳು ಪ್ರವೇಶಿಸಿ ಬಳಸುವಂತಾಗಬೇಕು. ಆಯೋಗದ ನಿಯಮವನ್ನು ಪಾಲಿಸದೆ  ಕಟ್ಟಡಗಳನ್ನು ಕಟ್ಟಲು ಅನುಮತಿಯನ್ನು, ಕಾರ್ಯಪೂರ್ತಿ ಪ್ರಮಾಣಪತ್ರವನ್ನು ಅಥವಾ ಕಟ್ಟಡವನ್ನು ಆಕ್ರಮಿಸುವುದನ್ನು ನಿರಾಕರಿಸಲಾಗುತ್ತದೆ.
  • ರಾಜ್ಯ ಮತ್ತು ರಾಷ್ಟ್ರಗಳ ಚುನಾವಣಾ ಆಯೋಗವು ಮತಕಟ್ಟೆಗಳು ಮತ್ತು ಮತದಾನ ಸಾಮಾಗ್ರಿಗಳನ್ನು ವಿಕಲಚೇತನ ವ್ಯಕ್ತಿಗಳು ಬಳಸುವಂತೆ ಕ್ರಮಕೈಗೊಳ್ಳಬೇಕು.
  •   ಶಿಕ್ಷಣ, ಕೌಶಲ್ಯದ ಅಭಿವೃದ್ಧಿ ಮತ್ತು ಉದ್ಯೋಗ: ಈ ವಿಧೇಯಕವು ವಿಕಲಚೇತನರ ಸಮನ್ವಯ ಶಿಕ್ಷಣ, ವೃತ್ತಿ ಶಿಕ್ಷಣ ಮತ್ತು ಸ್ವ-ಉದ್ಯೋಗಕ್ಕೆ ಅವಕಾಶ ಕಲ್ಪಿಸಿದೆ. ಎಲ್ಲಾ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರದಿಂದ ಅನುದಾನವನ್ನು ಪಡೆಯುವ ಸಂಸ್ಥೆಗಳು ಮಾನದಂಡಕ್ಕೆ ಒಳಪಟ್ಟ ವಿಕಲಚೇತನರಿಗೆ ಕನಿಷ್ಠ 5% ನಷ್ಟು ಮೀಸಲಾತಿಯನ್ನು ಒದಗಿಸಬೇಕು.
  • ಸಂಬಂಧಿಸಿದ ಸರ್ಕಾರ ಸೂಕ್ತ ಪ್ರಮಾಣದಲ್ಲಿ ಶಿಕ್ಷಕರ ತರಬೇತಿ ಸಂಸ್ಥೆಗಳನ್ನು ತೆರೆಯುವುದು.
  • ಕೇಂದ್ರ  ಮತ್ತು  ರಾಜ್ಯ  ಸರ್ಕಾರಗಳು  ಮಾನದಂಡಕ್ಕೆ ಒಳಪಟ್ಟ ವಿಕಲಚೇತನ  ವ್ಯಕ್ತಿಗಳಿಗೆ  ಉದ್ಯೋಗ ಸ್ಥಳವನ್ನು ಗುರುತಿಸಬೇಕು.  ಕನಿಷ್ಠ  5%  ನಷ್ಟು  ಹುದ್ದೆಗಳನ್ನು  ಮಾನದಂಡಕ್ಕೆ  ಒಳಪಟ್ಟ  ವಿಕಲಚೇತನರಿಗಾಗಿ ಮೀಸಲಿಡಬೇಕು. ಇದರಲ್ಲಿ ಈ ಕೆಳಗಿನ 5 ವಿಕಲತೆಗೆ ತಲಾ 1% ನಂತೆ ಮೀಸಲಾತಿಯನ್ನು ನೀಡಲಾಗಿದೆ.
  1.  ಅಂಧ ಮತ್ತು ಅಲ್ಪ ದೃಷ್ಟಿದೋಷವುಳ್ಳ ವ್ಯಕ್ತಿಗಳಿಗೆ, 
  2. ಶ್ರವಣ ಮತ್ತು ವಾಕ್ ನ್ಯೂನತೆವುಳ್ಳವರಿಗೆ,
  3.  ಚಲನವಲನ ವಿಕಲತೆ ಹೊಂದಿರುವವರಿಗೆ, 
  4. ಆಟಿಸಂ,ಭೌದ್ಧಿಕ ವಿಕಲತೆ ಮತ್ತು ಮಾನಸಿಕ ಅಸ್ವಸ್ಥರಿಗೆ ಹಾಗೂ 
  5.  ಬಹುವಿಕಲರಿಗೆ 
  • ಕಾನೂನು ಸಾಮಾರ್ಥ್ಯ: ವಿಕಲಚೇತನ ವ್ಯಕ್ತಿಯು ಇತರರಿಗೆ ಸಮಾನವಾಗಿ ಸ್ಥಿರ ಮತ್ತು ಚರ ಆಸ್ಥಿಯನ್ನು ಹೊಂದುವ ಹಾಗೂ ತಮ್ಮ ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸುವ ಹಕ್ಕನ್ನು ಹೊಂದಿರುತ್ತಾರೆ,
  • ಸಂರಕ್ಷಕರು/ಪೋಷಕರು: ಜಿಲ್ಲಾ ನ್ಯಾಯಲಯವು ಮಾನಸಿಕ ಅಸ್ವಸ್ಥ ವ್ಯಕ್ತಿಯು ತನ್ನನ್ನು ತಾನು ಪೋಷಿಸಿಕೊಳ್ಳಲು ಸಾಧ್ಯವಾಗದ್ದಿದ್ದು ಕಂಡುಬಂದರೆ ಆಗ ಈ ವಿಧೇಯಕವು ಅವರಿಗೆ ಪೋಷಕರನ್ನು ನೇಮಿಸಲು ಅವಕಾಶ ಕಲ್ಪಿಸಿದೆ.
  •  ವಿಕಲಚೇತನರಿಗಾಗಿ ರಾಷ್ಟ್ರ ಮತ್ತು ರಾಜ್ಯ ಆಯೋಗಗಳು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮವಾಗಿ ರಾಷ್ಟ್ರ ಮತ್ತು ರಾಜ್ಯ ಆಯೋಗವನ್ನು ರಚಿಸಬೇಕು.
  • ಕೇಂದ್ರ ಮತ್ತು ರಾಜ್ಯ ಸಲಹಾ ಮಂಡಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಕಲತೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸಲಹಾ ಮಂಡಳಿಯನ್ನು ತೆರೆಯಬೇಕು. ಈ ಮಂಡಳಿಯು ಸರ್ಕಾರಕ್ಕೆ ವಿಕಲತೆಗೆ ಸಂಬಂಧಿಸಿದ ನೀತಿ ಮತ್ತು ಕಾರ್ಯಾಕ್ರಮಗಳನ್ನು ರೂಪಿಸಲು ಮತ್ತು ವಿಕಲಚೇತನರೊಂದಿಗೆ ಒಡನಾಟ ಹೊಂದಿರುವ ಸಂಸ್ಥೆಗಳ ಚಟುವಟಿಕೆಯನ್ನು ಪರಿಶೀಲನೆ ಮಾಡಲು ಸಲಹೆಗಳನ್ನು ನೀಡುತ್ತದೆ.
ಹೆಚ್ಚಿನ ಮಾಹಿತಿಗಾಗಿ:
http://www.prsindia.org/uploads/media/Person%20with%20Disabilities/The%20Right%20of%20Persons%20with%20Disabilities%20Bill.pdf

D.Ed.SE.HI Hindi Question Papers