Thursday, 20 August 2015

DDRS ಯೋಜನೆಯ ಮೂಲಕ ಆರ್ಥಿಕ ನೆರವನ್ನು ಪಡೆಯಲು ಇರಬೇಕಾದ ಮಾನದಂಡಗಳು




 

          ಯೋಜನೆಯ ಪ್ರಸ್ತಾವನೆಯ ಪ್ರಮುಖ್ಯತೆ ಮತ್ತು ಗುಣಗಳ ಆಧಾರದ ಮೇಲೆ ನೆರವು/ಅನುದಾನದ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ನಿಗದಿತ ವೆಚ್ಚ ಮಾನದಂಡಗಳ ಆಧಾರದ ಮೇಲೆ ಯೋಜನಾ ವೆಚ್ಚದ ಶೇ.90% ಹಣವನ್ನು ನೀಡಲಾಗುತ್ತದೆ. NGOಗಳ ಸ್ವಾವಲಂಬನೆಯನ್ನು ಪ್ರೋತ್ಸಾಹಿಸಲು, ನಗರ ಪ್ರದೇಶದ ಯೋಜನೆಗೆ 7 ವರ್ಷಗಳ ಕಾಲ ಅನುದಾನವನ್ನು ನೀಡಿದ ನಂತರ ಪ್ರತಿ ಪರ್ಯಾಯ ವರ್ಷದಲ್ಲೂ 5% ರಷ್ಟೂ ಅನುದಾನವನ್ನು ತಗ್ಗಿಸಲಾಗುತ್ತದೆ. ತನ್ಮೂಲಕ ಅನುದಾನವನ್ನು 75% ರಷ್ಟು ಇಳಿಸಬಹುದು. 

ಅರ್ಜಿ ಮತ್ತು ಮಂಜೂರಾತಿ:
 
ಹೊಸ ಯೋಜನೆ:

          ಹೊಸ ಯೋಜನೆಗಳಿಗೆ ಅನುದಾನವನ್ನು ಮಂಜೂರು ಮಾಡಲು ರಾಜ್ಯ ಸರ್ಕಾರ/ರಾಜ್ಯ ಆಯುಕ್ತರು/ ರಾಷ್ಟ್ರೀಯ ಸಂಸ್ಥೆಗಳು/ಸಂಘಟನೆ/ಸಮಾಜೀಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ಈ ಉದ್ದೇಶಕ್ಕಾಗಿ ರಚಿತವಾದ ಇತರೆ ಯಾವುದೆ ವ್ಯವಸ್ಥೆಯಿಂದ  ಸೂಚಿತ ನಮೂನೆಯಲ್ಲಿ ಶಿಫಾರಸ್ಸು ಮಾಡಬೇಕು. ವೃತ್ತಿಪರರಿಗೆ ತರಬೇತಿ ನೀಡಲು ಉದ್ದೇಶಿಸಿರುವ ಹೊಸ ಯೋಜನೆಗಳು ಮಾನ್ಯತೆ ಮತ್ತು ಬೆಂಬಲಕ್ಕಾಗಿ RCI ಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ.

ಯೋಜನೆಯನ್ನು ಮುಂದುವರೆಸುವುದು:

          ಸೂಚಿತ ನಮೂನೆಯ ಅರ್ಜಿಯನ್ನು ಅನುದಾನ ಬಿಡುಗಡೆಗಾಗಿ ಸಲ್ಲಿಸಬೇಕು. ಅನುದಾನ ಬಿಡುಗಡೆಗಾಗಿ ಈ ಕೆಳಕಂಡ ದಾಖಲೆಗಳನ್ನು ಸಲ್ಲಿಸುವುದು ಅಗತ್ಯವಾಗಿರುತ್ತವೆ.


  1. ಅನುದಾನವನ್ನು ಪಡೆಯಲು ಇಚ್ಚಿಸುವ ಆರ್ಥಿಕ ವರ್ಷದ ವಿತ್ತಿಯ ಅಂದಾಲು ಪಟ್ಟಿ (ಆರ್ವತಕ ಮತ್ತು ಆರ್ವತಕವಲ್ಲದ ಅಂಶಗಳನ್ನು ಪ್ರತ್ಯೇಕವಾಗಿ ಸಲ್ಲಿಸಬೇಕು)
  2. ಲೆಕ್ಕ ಪರಿಶೋಧನೆಯ ಪ್ರಮಾಣ ಪತ್ರ  
  3. ರಸೀದಿ ಮತ್ತು ಸಂದಾಯ ಪಟ್ಟಿ, ಆದಾಯ ಮತ್ತು ವೆಚ್ಚದ ಪಟ್ಟಿ ಹಾಗೂ ಉಳಿತಾಯ ಪಟ್ಟಿ
  4. ಹಿಂದಿನ ವರ್ಷದ ವಾರ್ಷಿಕ ವರದಿ
  5. ಸಿಬ್ಬಂದಿ ನೇಮಕದ ವಿವರ
  6. ಫಲಾನೂಭವಿಗಳ ವಿವರ
  7. ಪದಾಧೀಕಾರಿ ಮತ್ತು ನಿರ್ವಹಣ ಮಂಡಳಿಯ ಸದಸ್ಯರುಗಳ ವಿವರ
  8. ಸಂಘಟನೆಗೆ ಇತರೆ ಯಾವುದೇ ಮಾಹಿತಿಗಳು ಅವಶ್ಯಕವೆಂದು ತಿಳಿದು ಬಂದಲ್ಲಿ ನೀಡುವುದು. 
*********
ಮುಗಿಯಿತು.

Tuesday, 11 August 2015

DDRS ಯೋಜನೆಯಲ್ಲಿ ಯೋಜನಾ ವೆಚ್ಚದ ವಿವರ

        
                 I.            ಆವರ್ತಕ ವೆಚ್ಚ :
  1. ಯೋಜನೆಗಳ ನಿರ್ವಹಣೆಗಾಗಿ ಸ್ವಯಂ ಸೇವ ಸಂಘಟನೆಗಳಿಂದ ನೇಮಕವಾದ ಸಿಬ್ಬಂದಿಗಳಿಗೆ ಗೌರವ ಧನ ನೀಡಲು
  2. ಫಲಾನೂಭವಿಗಳ ಸಾರಿಗೆಗೆ
  3. ಫಲಾನೂಭವಿಗಳಿಗೆ/ವಸತಿ ನಿಲಯಗಳ ನಿರ್ವಹಣೆಗಾಗಿ ಶಿಶ್ಯವೇತನ
  4. ಕಚ್ಚಾ ಸಾಮಾಗ್ರಿಗಳ ವೆಚ್ಚ
  5. ಕಛೇರಿ ವೆಚ್ಚ, ವಿದ್ಯುತ್ ಬಾಪ್ತು, ನೀರಿನ ಕರ ಮುಂತಾದವುಗಳನ್ನು ಭರಿಸಲು ಸಾದಿಲ್ವಾರು ಹಣ
  6. ಬಾಡಿಗೆ

              II.            ಆವರ್ತಕವಲ್ಲದ ವೆಚ್ಚಗಳು:
  1. ಪೀಠೋಪಕರಣಗಳು
  2. ಸಾಧನಗಳು
  3. ಕಟ್ಟಡ ನಿರ್ಮಾಣ
  4. ಪುಸ್ತಕಗಳು

ಅರ್ಹ ಸಂಘಟನೆಗಳು:
ಈ ಕೆಳಗಿನ ಸಂಘಟನೆಗಳು/ಸಂಸ್ಥೇಗಳು ಈ ಯೋಜನೆಯ ಅಡಿಯಲ್ಲಿ ಬರಲು ಅರ್ಹರಾಗಿರುತ್ತಾವೆ.
  1. ಸೊಸೈಟಿ ನೋಂದಣಿ ಕಾಯ್ದೆ ಅಥವಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸಂಬಂಧಪಟ್ಟ ಕಾಯ್ದೆಗಳ ಅಡಿಯಲ್ಲಿ ನೊಂದಾಯಿತ ಸಂಘಟನೆಗಳು ಅಥವಾ
  2. ತತ್ಕಾಲಕ್ಕೆ ಚಾಲ್ತಿಯಲ್ಲಿರುವ ಕಾನೂನಿನ ಅನ್ವಯ ನೋಂದಣಿಯಾದ ಸಾರ್ವಜನಿಕ ಟ್ರಸ್ಟ್.
  3. 1958ರ ಕಂಪನಿ ಕಾಯ್ದೆಯ 25ನೇ ಸೆಕ್ಷನ್  ಅನ್ವಯ ಪರವಾನಗಿ ಪಡೆದ ಚಾರಿಟಬಲ್ (ದತ್ತಿ) ಕಂಪನಿ.

ಮುಂದುವರೆದು, DDRS ಯೋಜನೆಯ ಅಡಿಯಲ್ಲಿ ದೇಣಿಗೆಯನ್ನು ಪಡೆಯಲು ಅರ್ಜಿ ಸಲ್ಲಿಸಿದ ಸಂಸ್ಥೆಯ ನೋಂದಾಣಿಯು ಕನಿಷ್ಟ 2 ವರ್ಷವಾದರೂ ಚಾಲ್ತಿಯಲ್ಲಿರಬೇಕು.

ಮೇಲಿನ ಕಂಡಿಕೆ (ಪ್ಯಾರ) ಯಲ್ಲಿ (i) ರಿಂದ (iii)ರವರೆಗೆ ನಮೂದಿಸಿರುವ ಸಂಸ್ಥೆಗಳು/ಸಂಘಟನೆಗಳು ಈ ಕೆಳಕಂಡ ಗುಣಗಳನ್ನು ಹೊಂದಿರಬೇಕು.
  1. ಸಂಸ್ಥೆಯು ಸೂಕ್ತವಾದ ನಿರ್ವಹಣಾ ವ್ಯವಸ್ಥೆಯೊಂದಿಗೆ, ಅಧಿಕಾರಗಳು, ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿರಬೇಕು ಹಾಗೂ ಬರೆದಿರಬೇಕು.
  2. ಯೋಜನೆಯನ್ನು ವಹಿಸಿಕೊಳ್ಳಲು ಸಂಪನ್ಮೂಲಗಳು, ಸೌಕರ್ಯಗಳು ಮತ್ತು ಅನುಭವಗಳನ್ನು ಹೊಂದಿರಬೇಕು.
  3. ಅದು ಒಬ್ಬ ವ್ಯಕ್ತಿಯ ಲಾಭಕ್ಕಾಗಿ ಅಥವಾ ವ್ಯಕ್ತಿಗಳ ಗುಂಪಿನ ಲಾಭಕ್ಕಾಗಿ ಕಾರ್ಯನಿರ್ವಸಬಾರದು.
  4. ಲಿಂಗ, ಧರ್ಮ, ಜಾತಿ ಅಥವಾ ನಂಬಿಕೆಗಳ ಅಧಾರದ ಮೇಲೆ ಯಾವುದೇ ವ್ಯಕ್ತಿಯ ಅಥವಾ ವ್ಯಕ್ತಿಗಳ ಗುಂಪನ್ನು ಬೇಧಭಾವ ಮಾಡಬಾರದು.
  5. ಅದು ವಾಸ್ತವದಲ್ಲಿ ಎರಡು ವರ್ಷಗಳ ಕಾಲ ಅಸ್ತಿತ್ವದಲ್ಲಿರಬೇಕು.
  6. ಅದರ ಆರ್ಥಿಕ ಸ್ಥಿತಿ ಉತ್ತಮವಾಗಿರಬೇಕು.

ಸೂಚನೆ: ವಿರಳ ಮತ್ತು ಅಸಾಧಾರಣ ಪ್ರಕರಣಗಳಲ್ಲಿ ಕಾರ್ಯದರ್ಶಿಗಳು ಆರ್ಥಿಕ ಸಲಹೆಗಾರರೊಂದಿಗೆ ಸಮಾಲೋಚಿಸಿ ಅನುಭವ, ಅಸ್ತಿತ್ವದಲ್ಲಿ ಇದ್ದ ಕಾಲ ಮತ್ತು ಆರ್ಥಿಕ ಸ್ಥಿತಿಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಸಡಿಲಗೊಳಿಸಬಹುದು. ಇದಕ್ಕಾಗಿ ಸೂಕ್ತ ಕಾರಣವನ್ನು ಲಿಖಿತ ರೂಪದಲ್ಲಿ ನೀಡಬೇಕಾಗುತ್ತದೆ.

                                                                               ಮುಂದುವರೆಯುವುದು....
ಈ ಅಂಕಣವನ್ನು ಓದಿದ ನಂತರ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿ.

Saturday, 1 August 2015

DDRS ಯೋಜನೆಯ ಅಡಿಯಲ್ಲಿ ಈ ಕೆಳಗಿನ ಮಾದರಿ ಯೋಜನೆಗಳಿಗೆ ಬೆಂಬಲವನ್ನು ನೀಡಲಾಗುತ್ತದೆ

  1. ಪೂರ್ವ ಪ್ರಾಥಮಿಕ ಮತ್ತು ಶೀಘ್ರ ಮದ್ಯಸ್ಥಿಕೆ ಮತ್ತು ತರಬೇತಿಯ ಯೋಜನೆ:ಈ ಯೋಜನೆಯ ಮುಖ್ಯ ಉದ್ದೇಶವೆಂದರೆ, ಶಿಶುವನ್ನು ಶಾಲೆಗೆ ಸೇರಿಸುವ 6 ವರ್ಷಗಳ ಕಾಲದ ವರೆಗೂ ವಿಶೇಷ ಶಾಲೆಗಳಿಗೆ/ಮುಖ್ಯವಾಹಿನಿಯ ಶಾಲೆಗಳಿಗೆ ದಾಖಲಿಸಲು ಅಗತ್ಯವಾದ ಸಿದ್ದತೆಗಳನ್ನು ಮಾಡುವುದು. ಈ ಯೋಜನೆಯು ಥೇರಪಿ, ಡೆ ಕೇರ್ ಮತ್ತು  ಪೋಷಕರಿಗೆ ಸಲಹೆ ನೀಡುವ ಸೇವೆಗಳನ್ನು ಸಹ ನೀಡುತ್ತದೆ.
  2. ವಿಶೇಷ ಶಾಲೆ :ಬುದ್ದಿಮಾಂದ್ಯ ಮಕ್ಕಳ, ಶ್ರವಣದೋಷವುಳ್ಳ ಮಕ್ಕಳ ಮತ್ತು ದೃಷ್ಟಿದೋಷವುಳ್ಳ ಮಕ್ಕಳಿಗಾಗಿ ವಿಶೇಷ ಶಾಲೆಗಳ ಯೋಜನೆಯನ್ನು ಇದು ಬೆಂಬಲಿಸುತ್ತದೆ. ವಿಶೇಷ ಶಿಕ್ಷಣವು ಮಕ್ಕಳಲ್ಲಿ ಸಂವಹನ ಕೌಶಲ್ಯ ಮತ್ತು ಇತರೆ ಇಂದ್ರಿಯಗಳ ಸಾಮಾರ್ಥ್ಯ, ದೈನಂದಿನ ಕಾರ್ಯುಗಳನ್ನು ನಿರ್ವಹಿಸುವ ಕೌಶಲ್ಯ ಅಂತಿಮವಾಗಿ ಮುಖ್ಯವಾಹಿನಿ ಶಾಲೆಯಲ್ಲಿ ಸಮನ್ವಯಗೊಳಿಸುವುದು. ಈ ನಿಧಿಯಿಂದ ವಸತಿ ಸೌಲಭ್ಯವನ್ನು ಸಹ ಮಕ್ಕಳಿಗೆ ಒದಗಿಸಬಹುದು. ಚಲನವಲನ ದೋಷವುಳ್ಳವರಿಗೂ ಶಾಲೆಗಳನ್ನು ತೆರೆಯಲು ನಿಧಿಯನ್ನು ಇಡಲಾಗಿದೆ, ಆದರೆ ಮಾದರಿ ಯೋಜನೆ ಲಭ್ಯವಿರುವುದಿಲ್ಲ. 
  3. ಸೆರೆಬ್ರಲ್ ಪಾಲ್ಸಿ ಮಕ್ಕಳಿಗಾಗಿ ಯೋಜನೆ:ಈ ಯೋಜನೆಯ ಉದ್ದೇಶವು ವಿಶೇಷ ಶಾಲೆ ಯೋಜನೆಯಂತೆಯೇ ಇದೆ. ಮಗುವಿನ ವೈಯಕ್ತಿಕ ಥೆರಪಿ ಅಗತ್ಯತೆಗೆ ಅನುಗುಣವಾಗಿ ಹೆಚ್ಚು ಮಹತ್ವವನ್ನು ಇಲ್ಲಿ ಒದಗಿಸಲಾಗುತ್ತದೆ.
  4. ವೃತ್ತಿ ತರಬೇತಿ ಕೇಂದ್ರಗಳು :15-35 ವರ್ಷದ ಒಳಗಿನ ವಿಕಲಚೇತನ ವ್ಯಕ್ತಿಗಳಿಗಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ಈ ಗುಂಪಿನಲ್ಲಿ ಬರುವ ವಿಕಲಚೇತನ ವ್ಯಕ್ತಿಗಳಿಗೆ ಕೌಶಲ್ಯವನ್ನು ನೀಡಿ ಆರ್ಥಿಕವಾಗಿ ಶಕ್ತರನ್ನಾಗಿ ಮಾಡುವುದು ಇದರ ಉದ್ದೇಶ. ತರಬೇತಿಯ ಗರಿಷ್ಠ ಅವಧಿ ಮತ್ತು ವ್ಯಾಪಾರದ ವಿವರವನ್ನು ಒಳಗೊಂಡಿರುವ ಪಟ್ಟಿಯನ್ನು ಈಗಾಗಲೆ ಯೋಜನೆಯಲ್ಲಿ ಸೇರಿಸಲಾಗಿದೆ.
  5. Sheltered Workshop :ಈ ಯೋಜನೆಯ ಉದ್ದೇಶವು ವೃತ್ತಿ ತರಬೇತಿ ಕೇಂದ್ರಗಳಂತೆಯೇ ಇದೆ. ಆದರೆ ಈ ಯೋಜನೆಯಲ್ಲಿ ಅದಾಯದ ಉತ್ಪತಿಯ ಅವಕಾಶಗಳನ್ನು ಸೃಜಿಸುವುದರ ಮೇಲೆ ಹೆಚ್ಚು ಕೇಂದ್ರಿಕರಿಸಲಾಗಿರುತ್ತದೆ.
  6. ಕುಷ್ಠ ರೋಗ ನಿವಾರಣೆಯಾದ ವ್ಯಕ್ತಿಗಳ ಪುನರ್ವಸತಿ ಯೋಜನೆ:ಕುಷ್ಠ ರೋಗ ನಿವಾರಣೆಯಾದ ವ್ಯಕ್ತಿಗಳಿಗೆ ಕೌಶಲ್ಯವನ್ನು ಒದಗಿಸುವ ಮೂಲಕ ಅವರೆ ತಮ್ಮ ಆರ್ಥಿಕ-ಸಾಮಾಜಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುವಂತೆ ಮಾಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಈ ಯೋಜನೆಯು ವೃತ್ತಿ ತರಬೇತಿ ಘಟಕವನ್ನು ಮತ್ತು ತ್ರೀರ್ವತರನಾದ ವಿಕಲತೆಯನ್ನು ಹೊಂದಿರುವ ವ್ಯಕ್ತಿಗಳಿಗೆ ವಸತಿಯನ್ನು ನೀಡುವ ಅಂಶಗಳನ್ನೂ ಸಹ ಹೊಂದಿದೆ.
  7. ಚಿಕಿತ್ಸೆ ಪಡೆದ ಮತ್ತು ಹತೋಟಿಗೆ ಒಳಪಟ್ಟ ಮಾನಸಿ ಅಸ್ವಸ್ಥ ವ್ಯಕ್ತಿಗಳ ಮಾನಸಿಕ – ಸಮಾಜಿಕ ಪುನರ್ವಸತಿಗಾಗಿ Half Way Homeಗಳನ್ನು ತೆರೆಯುವುದು:ಮಾನಸಿಕ ಅಸ್ವಸ್ಥನಾಗಿ ಚಿಕಿತ್ಸೆ ಪಡೆದ ಮತ್ತು ಹತೋಟಿಗೆ ಒಳಪಟ್ಟು ಮಾನಸಿಕ ಆಸ್ಪತ್ರೆಯಿಂದ ಬಿಡುಗಡೆಯಾದ ವ್ಯಕ್ತಿಗಳಿಗೆ ಪುನರ್ವಸತಿಯನ್ನು ಮಾಡುವ ವ್ಯವಸ್ಥೆಯನ್ನು ರೂಪಿಸುವುದು ಈ ಯೋಜನೆಯ ಉದ್ದೇಶ. ಇಂತಹ ವ್ಯಕ್ತಿಗಳಿಗೆ ವೃತ್ತಿ ತರಬೇತಿಯನ್ನು ನೀಡುವ ಕಾರ್ಯವನ್ನು ಯೋಜನೆಯು ಹೊಂದಿದೆ. ಇಂತಹ ವ್ಯಕ್ತಿಗಳಿಗೆ ಮತ್ತು ಇವರ ಕುಟುಂಬ ವರ್ಗದವರಿಗೆ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿ ಮಾನಸಿಕ ಅಸ್ವಸ್ಥೆಯಿಂದ ವಿಮುಕ್ತಿ ಪಡೆದ ವ್ಯಕ್ತಿಯು ಮತ್ತೆ ಕುಟುಂಬ/ಸಮುದಾಯದ ಒಬ್ಬ ಸದಸ್ಯನಾಗುವಂತೆ ಮಾಡಲು ಯೋಜನೆಯನ್ನು ಹೊಂದಿದೆ. ಅಸ್ವಸ್ಥೆಗೆ ಸಂಬಂಧಿಸಿದಂತೆ ವೈದ್ಯಕೀಯ ಸಲಹೆ/ ಚಿಕಿತ್ಸೆಗಳಿಗೆ ತಗಲುವ ವೆಚ್ಚವನ್ನು ಸಹ ಈ ಯೋಜನೆ ಅಡಿಯಲ್ಲಿ ಬರಿಸಲಾಗುತ್ತದೆ.
  8. ಸಮೀಕ್ಷೆ, ಗುರುತಿಸುವಿಗೆ, ಜಾಗೃತಿ ಮತ್ತು ಸಂವೇದನೆಗೆ ಸಂಬಂಧಿಸಿದ ಯೋಜನೆ:ಈ ಯೋಜನೆಯು ವಿಕಲತೆಯಯನ್ನು ಗುರುತಿಸುವುದರೊಂದಿಗೆ, ಶೀರ್ಘ್ರ ಮದ್ಯಸ್ಥಿಕೆಯ ಮೂಲಕ ಜಾಗೃತಿ ಮೂಡಿಸುವುದು, ಪೋಷಕರು/ಪಾಲಕರುಗಳಿಗೆ ವಿಕಲಚೇತನ ವ್ಯಕ್ತಿಗಳ ಅವಶ್ಯಕತೆಗಳನ್ನು ಪೂರೈಸಲು ಸಂವೇದಿಕರಣಗೊಳಿಸುವುದು, ಸೂಕ್ತ ಪುನರ್ವಸತಿ ಕಾರ್ಯಕ್ರಮಗಳ ಬಗ್ಗೆ ಸೂಚಿಸುವುದು ಮತ್ತು ವಿಕಲತೆಯ ಕ್ಷೇತ್ರದಲ್ಲಿನ ಹೊಸ ಅಲೆಗಳ ಬಗ್ಗೆ ಸಂಶೋಧನೆಗಳನ್ನು ನಡೆಸುವುದನ್ನು ಪ್ರೋತ್ಸಾಹಿಸುವ ಉದ್ದೇಶಗಳನ್ನು ಹೊಂದಿದೆ.
  9. ಗೃಹ ಆಧಾರಿತ ಪುನರ್ವಸತಿ ಕಾರ್ಯಕ್ರಮ:ಮನೆಯ ಪರಿಸರದಲ್ಲಿ ವಿಕಲಚೇತನ ಮಕ್ಕಳಿಗೆ ಚಲನವಲನ ಕೌಶಲ್ಯ ನೀಡುವುದು, ಸಾಮಾನ್ಯ ಸಂವಹನ ಕೌಶಲ್ಯವನ್ನು ಬೆಳೆಸುವುದು, ದೈನಂದಿನ ಕಾರ್ಯಗಳನ್ನು ಮಾಡುವ ಕೌಶಲ್ಯದ ಬೆಳವಣಿಗೆ, ಮಕ್ಕಳ ಪೋಷಕರನ್ನು ತರಬೇತುಗೊಳಿಸುವುದು ಮತ್ತು ಸಂವೇದಿಗಳನ್ನಾಗಿ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
  10. ಸಮುದಾಯ ಆಧಾರಿತ ಪುನರ್ವಸತಿ ಯೋಜನೆ :ವಿಕಲಚೇತನ ವ್ಯಕ್ತಿಗಳಿಗೆ ತರಬೇತಿ ನೀಡುವುದು, ಪುನರ್ವಸತಿಗೊಳಿಸುವುದು ಮತ್ತು ತಮ್ಮ ಸಮುದಾಯದಲ್ಲಿ ಅವರು ಸಮನ್ವಯಗೊಳ್ಳುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ. ವಿಕಲಚೇತನರಿಗೆ ಸೇವೆಗಳು ದೊರಕದೆ ಇರುವ/ ಸೀಮಿತವಿರುವ ಪ್ರದೇಶಗಳಲ್ಲಿ, ಸಂಸ್ಥೆಯೇತರ ವ್ಯವಸ್ಥೆಗಳ ಮೂಲಕ ಪುನರ್ವಸತಿ ಸೇವೆಗಳು ದೊರಕುವಂತೆ ಮಾಡುವುದು ಇದರ ಉದ್ದೇಶ. ವಿಕಲಚೇತನ ವ್ಯಕ್ತಿಗಳ ಪೋಷಕರು, ಆರೋಗ್ಯ ಕಾರ್ಯಕರ್ತರು, ಸಮುದಾಯ ಕಾರ್ಯಕರ್ತರುಗಳ ಸಹಬಾಗಿತ್ವವನ್ನು ಸಾಧಿಸುವುದು ಇಲ್ಲಿ ಅತಿ ಮುಖ್ಯ. ಈ ಯೋಜನೆಗಳು ನಿರ್ದಿಷ್ಟವಾಗಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಸೂಕ್ತವಾಗಿವೆ.
  11. ಅಲ್ಪ ದೃಷ್ಠಿ ಕೇಂದ್ರಗಳಿಗಾಗಿ ಯೋಜನೆ:ಅಲ್ಪ ದೃಷ್ಠಿಯನ್ನು ಹೊಂದಿರುವ ವ್ಯಕ್ತಿಗಳಿಗೆ ವೈಧ್ಯಕೀಯ ಪುನರ್ವಸತಿ ಸೌಲಭ್ಯವನ್ನು ಈ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ. ಈ ಕೇಂದ್ರಗಳು ದೃಷ್ಠಿ ದೋಷವನ್ನು ಗುರುತಿಸುವ, ಮೌಲ್ಯಮಾಪನ ಮಾಡುವ, ಪುನರ್ವಸತಿ ಮತ್ತು ಸಲಹ ಸೇವೆಗಳನ್ನು ನೀಡುತ್ತವೆ. ಅಷ್ಟೆ ಅಲ್ಲದೆ, ಮಾರ್ಗದರ್ಶನ ಮಾಡುವ ಮತ್ತು ದೃಷ್ಠಿ ಸಾಮಾರ್ಥ್ಯ ಹೆಚ್ಚಿಸುವ ಮೂಲಕ ಅಲ್ಪ ದೃಷ್ಠಿದೋಷವನ್ನು ಹೊಂದಿರು ವ್ಯಕ್ತಿಗಳು ಗರಿಷ್ಠ ಪ್ರಮಾಣದಲ್ಲಿ ಶಕ್ತರಾಗುವಂತೆ ಮಾಡುವುದು.
  12. ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆ:ವಿಕಲಚೇತನರ ಪುನರ್ವಸತಿ ಕ್ಷೇತ್ರದಲ್ಲಿ ಸಂಪನ್ಮೂಲ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸಂಪನ್ಮೂಲಗಳ ಜಾಲವನ್ನು ನಿರ್ಮಿಸುವ ಹಾಗೂ ವಿಶೇಷ ಶಿಕ್ಷಣದಲ್ಲಿ ತರಬೇತಿಯನ್ನು ನೀಡುವ ಯೋಜನೆಗಳನ್ನು ಹೊಂದಿದೆ.
  13. ವಿಚಾರ ಸಂಕಿರಣ/ಕಾರ್ಯಗಾರ/ಗ್ರಾಮೀಣ ಪ್ರದೇಶಗಳಲ್ಲಿ ಶಿಬಿರ:ವಿಚಾರ ಸಂಕಿರಣ/ಕಾರ್ಯಗಾರ/ಗ್ರಾಮೀಣ ಪ್ರದೇಶಗಳಲ್ಲಿ ಶಿಬಿರಗಳಿಗಾಗಿ ಈ ಯೋಜನೆಯ ಅಡಿಯಲ್ಲಿ ಇಡಿಗಂಟನ್ನು ಇಡಲಾಗಿರುತ್ತದೆ.
  14. ವಿಕಲಚೇತನರಿಗಾಗಿ ಪರಿಸರ ಸ್ನೇಹಿ ಕಾರ್ಯಗಳು :ವಿಕಲಚೇತನ ವ್ಯಕ್ತಿಗಳು ತೋಟಗಾರಿಗೆ ಮಾಡುವುದು, ನರ್ಸರಿಗಳನ್ನು ನಿರ್ಮಿಸುವುದು ಮತ್ತು ಮರಗಳನ್ನು ನೆಡುವಂತಹ ಪರಿಸರ ಸ್ನೇಹಿ ಕಾರ್ಯಗಳನ್ನು ಈ ಯೋಜನೆಯು ಬೆಂಬಲಿಸುತ್ತದೆ.
  15. ಕಂಪ್ಯೂಟರ್ ನ್ನು ಕೊಳ್ಳಲು ಧನ ಸಹಾಯ:ಅಗತ್ಯತೆಗೆ ಅನುಗುಣವಾಗಿ ಸೂಕ್ತ ವಿನ್ಯಾಸದ ಕಂಪ್ಯೂಟರ್ ಗಳನ್ನು ಕೊಳ್ಳಲು ಈ ಯೋಜನೆಯು ಧನ ಸಹಾಯ ಮಾಡುತ್ತದೆ. DDRS ಯೋಜನೆಯಲ್ಲಿ ಬರುವ ಇತರೆ ಯೋಜನೆಗಳಿಗೂ ಕಂಪ್ಯೂಟರ್ ಕೊಳ್ಳಲು ಧನ ಸಹಾಯ ಮಾಡಲಾಗುತ್ತದೆ.
  16. ಕಟ್ಟಡಗಳ ನಿರ್ಮಾಣ:ತರಗತಿ ಕೊಠಡಿ, ವೃತ್ತಿ ತರಬೇತಿ/ಉದ್ಯೋಗ ಕೇಂದ್ರ ಮತ್ತು ವಸತಿ ನಿಲಯಗಳ ನಿರ್ಮಾಣವನ್ನು ಈ ಯೋಜನೆಯ ಅಡಿಯಲ್ಲಿ ಬೆಂಬಲಿಸಲಾಗುತ್ತದೆ.
  17. ಕಾನೂನು ಸಾಕ್ಷರತೆಗಾಗಿ ಯೋಜನೆ: (ಕಾನೂನು ಸಲಹೆ, ಕಾನೂನು ಸಾಧನ ಮತ್ತು ವಿಶ್ಲೇಷನೆ ಹಾಗೂ ಪ್ರಸ್ತುತ ಲಭ್ಯವಿರುವ ಕಾನೂನಿನ ಮೌಲ್ಯಮಾಪನ): ಈ ಮೇಲಿನ ವಿಷಯಗಳಿಗೆ ಸಂಬಂಧಿಸಿದಂತೆ, ಯೋಜನೆಯು ಗೌರವ ಧನ ರೂಪದಲ್ಲಿ ಅರೆ ಕಾನೂನು ತರಬೇತಿ ಪಡೆಯುತ್ತಿರುವವರಿಗೆ ನೀಡಲಾಗುತ್ತದೆ.
  18. ವಿಕಲಚೇತನರ ಜಿಲ್ಲಾ ಪುನರ್ವಸತಿ ಕೇಂದ್ರ:ಸರ್ಕಾರದಿಂದ ಪ್ರಾರಂಭವಾದ ವಿಕಲಚೇತನರ ಜಿಲ್ಲಾ ಪುನರ್ವಸತಿ ಕೇಂದ್ರಗಳು ಸ್ವಯಂ ಸೇವ ಸಂಘಟನೆಗಳಿಗೆ ವರ್ಗಾವಣೆಯಾದ ನಂತರ ಅವುಗಳ ಕಾರ್ಯವನ್ನು ಬೆಂಬಲಿಸುವುದು ಈ ಯೋಜನೆಯ ಉದ್ದೇಶ. ಈ ಕೆಂದ್ರಗಳು ಸಮುದಾಯದ ತಳ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸುವುದು, ಪುನರ್ವಸತಿ ಮತ್ತು ತರಬೇತಿ ನೀಡುವ ಕಾರ್ಯಗಳನ್ನು ನಿರ್ವಹಿಸುತ್ತದೆ.

                                                           ಮುಂದುವರೆಯುವುದು.....

Tuesday, 21 July 2015


ದೀನ್ ದಯಾಳ್ ವಿಕಲಚೇತನರ ಪುನರ್ವಸತಿ ಯೋಜನೆಯ ಮಾರ್ಗ ಮತ್ತು ತಂತ್ರಗಳು

ವಿಕಲಚೇತನರ ಪುನರ್ವಸತಿಗೆ ಅಗತ್ಯವಾದ ವಿವಿಧ ಶ್ರೇಣಿಯ ಸೌಲಭ್ಯಗಳಾದ ಶೀಘ್ರ ಮದ್ಯಸ್ಥಿಕೆದೈನಂದಿನ ಕೆಲಸಗಳನ್ನು ಮಾಡಿಕೊಳ್ಳುವ ಕೌಶಲ್ಯಗಳ ಬೆಳವಣಿಗೆಶಿಕ್ಷಣಔದ್ಯೋಗಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೌಶಲ್ಯ ಅಭಿವೃದಿತರಬೇತಿ ಮತ್ತು ಅರಿವು ಮೂಡಿಸಲು ಸ್ವಯಂ ಸೇವ ಸಂಘಟನೆಗಳಿಗೆ ಆರ್ಥಿಕ ನೆರವನ್ನು ಒದಗಿಸುವುದು  ಯೋಜನೆಯ ಮಾರ್ಗವಾಗಿದೆಸಮಾಜದ ಮುಖ್ಯವಾಹಿನಿಯಲ್ಲಿ ವಿಕಲಚೇತನ ವ್ಯಕ್ತಿಗಳನ್ನು ಸಮನ್ವಯಗೊಳಿಸುವ ಮತ್ತು ಅವರ ನೈಜ ಸಾರ್ಮಥ್ಯ ವಾಸ್ತವೀಕರಿಸುವ ದೃಷ್ಠಿಯಿಂದ  ಯೋಜನೆಯ ಉದ್ದೇಶಗಳನ್ನು ಸಾಧಿಸುವ ದೆಸೆಯಲ್ಲಿ ಅನುಸರಿಸಬೇಕಾದ ಮುಖ್ಯವಾದ ತಂತ್ರಗಳೆಂದರೆ;
  1. ಎಲ್ಲಾ ಹಂತಗಳಲ್ಲೂ - ಕ್ಷೇತ್ರಗಳಲ್ಲೂ ಶೈಕ್ಷಣಿಕ ಅವಕಾಶಗಳು ಹೆಚ್ಚಿಸುವುದು ಹಾಗೂ ಅದಾಯದ ಉತ್ಪತ್ತಿ, ಲಾಭದಾಯಕ ಹುದ್ದೆಗಳು, ವೃತ್ತಿಪರ ಮತ್ತು ಉದ್ಯೋಗ ಅವಕಾಶಗಳ ಮಹತ್ವವನ್ನು ಹೆಚ್ಚಿಸುವುದು.
  2. ಔಪಚಾರಿಕ ಮತ್ತು ಅನೌಪಚಾರಿಕ ರೀತಿಯಲ್ಲಿ ಉದ್ಯೋಗಾವಕಾಶಗಳು ದೊರೆಯುವಂತೆ ಮಾಡುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಪ್ರೋತ್ಸಾಹಿಸುವುದು.
  3. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವ್ಯಾಪಕವಾದ ಸಮೂದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು.
  4. ವಿಕಲಚೇತನರ ಚಟುವಟಿಕೆಗಳಲ್ಲಿ / ಯೋಜನೆಗಳಲ್ಲಿ / ಕಾರ್ಯಕ್ರಮಗಳಲ್ಲಿ ಕಾರ್ಯನಿರ್ವಹಿಸುವ ಪ್ರತಿ ಮಟ್ಟದಲ್ಲೂ ಕಾರ್ಯನಿರ್ವಹಿಸಲು ಅಗತ್ಯವಾದ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಗೋಳಿಸುವುದು.
  5. ಮಾಹಿತಿ, ಸಾಕ್ಷ್ಯಚಿತ್ರ ಮತ್ತು ತರಬೇತಿ ಸಾಮಾಗ್ರಿಗಳ ಅಭಿವೃದ್ಧಿ, ಮುದ್ರಣ ಮತ್ತು ಹಂಚಿಕೆಯನ್ನು ಬೆಂಬಲಿಸುವುದು.
  6. ವಿವಿಧ ಮಟ್ಟಗಳಲ್ಲಿ ಸುಸರ್ಜ್ಜಿತ ಸಂಪನ್ಮೂಲ ಕೇಂದ್ರಗಳನ್ನು ತೆರೆಯುವುದು. ಸ್ವ-ಸಹಾಯ ಸಂಘ, ಪೋಷಕರ ಸಂಘಟನೆ ಮತ್ತು ಸ್ವತಂತ್ರ ಜೀವನ ನಡೆಸುವುದನ್ನು ಪ್ರೋತ್ಸಾಹಿಸುವುದು.
  7. ಸಹಕಾರ, ಸಮನ್ವಯ, ಜಾಲನೀರ್ಮಿಸುವುದು ಮತ್ತು ಬಹುವಲಯಗಳೊಂದಿಗೆ ಸೇರುವುದನ್ನು ಪ್ರೋತ್ಸಾಹಿಸುವುದು.
  8. ವಿಕಲಚೇತನರಿಂದ ರೂಪಿತವಾದ ಪರಿಸರ ಸ್ನೇಹಿ ಯೋಜನೆಗಳನ್ನು ಪ್ರೋತ್ಸಾಹಿಸುವುದು. 
  9. ಕ್ರೀಡೆ, ಮನೊರಂಜನೆ, ಬಿಡುವಿನ ವೇಳೆಯ ಚಟುವಟಿಕೆಗಳು, ಪ್ರವಾಸ, ಸೃಜನಾತ್ಮಕ ಕಾರ್ಯಗಳನ್ನು ಬೆಂಬಲಿಸುವುದು.
  10. ಸೂಕ್ತ ಮನೆ ಮತ್ತು ವಸತಿ ನಿಲಯ ಸೌಲಭ್ಯಗಳನ್ನು ಹೊಂದಲು ಬೆಂಬಲವನ್ನು ನೀಡುವುದು.
  11. ಸಮೀಕ್ಷೆ ಮತ್ತು ಇತರೆ ರೋಗಗಳ ಅದ್ಯಾಯನವನ್ನು ಮಾಡಲು ಪ್ರೋತ್ಸಾಹಿಸುವುದು.
  12. ಬೆಳವಣಿಗೆ ಹೊಂದುತ್ತಿರುವ ವಿವಿಧ ಕ್ಷೇತ್ರಗಳಲ್ಲಿ, ಹೊಸ ರೀತಿಯ ತಂತ್ರಗಳಲ್ಲಿ, ಸಹಾಯಕ ಸಾಧನ ಸಲಕರಣೆ, ಮತ್ತು ಬಳಕೆಗೆ ಯೋಗ್ಯ ತಂತ್ರಜ್ಞಾನ ಬಗೆಗಿನ ಸಂಶೋಧನೆಯನ್ನು ಹಾಗೂ ಗುಣಮಟ್ಟದಿಂದ ಕೂಡಿದ ಈ ರೀತಿಯ ಸಾಧನಗಳ ಉತ್ಪಾದನೆಯನ್ನು ಪ್ರೋತ್ಸಾಹಿಸುವುದು.
  13. ವಿಕಲಚೇತನ ವ್ಯಕ್ತಿಗಳ ಮಾನವ ಹಕ್ಕು, ನಾಗರಿಕ ಹಕ್ಕು ಮತ್ತು ಗ್ರಾಹಕ ಹಕ್ಕುಗಳ ರಕ್ಷಣೆಯನ್ನು ಬೆಂಬಲಿಸುವುದು
  14. ಕಾನೂನು ಸಲಹೆ, ಕಾನೂನು ಸಾಧನ ಮತ್ತು ವಿಶ್ಲೇಷನೆ ಮತ್ತು ಪ್ರಸ್ತುತ ಲಭ್ಯವಿರುವ ಕಾನೂನಿನ ಮೌಲ್ಯಮಾಪನವನ್ನು ಒಳಗೊಂಡಂತೆ ಕಾನೂನು ಸಾಕ್ಷರತೆಯನ್ನು ಹೊಂದಲು ಸಹಾಯ ಮಾಡುವುದು.
  15. ವಿಕಲಚೇತನ ವ್ಯಕ್ತಿಗಳ ಅಗತ್ಯತೆಗಳನ್ನು ಪೂರೈಸುವ ಕ್ರಮಗಳನ್ನು ಬೆಂಬಲಿಸುವುದು ಮತ್ತು 1995ರ ಅಂಗವಿಕಲರ ಅಧಿನಿಯಮದಲ್ಲಿ ತಿಳಿಸಿರುವ ಕರ್ತವ್ಯಗಳನ್ನು ನಡೆಸುವುದು.
                                                                                                    ಮುಂದುವರೆಯುವುದು....
ಈ Post ನ್ನು ಓದಿದ ನಂತರ ತಮ್ಮ ಅನಿಸಿಕೆಯನ್ನು ಹೇಳಲು ಮರೆಯದಿರಿ....


Friday, 26 June 2015


ವಿಕಲಚೇತನರ ಪುನರ್ವಸತಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಪಂಚವಾರ್ಷಿಕ ಯೋಜನೆಯ ಮೂಲಕ ಸರ್ಕಾರೇತರ ಸಂಘಟನೆಗಳಿಗೆ ಅನುದಾನವನ್ನು ನೀಡುತ್ತಿದೆ. 1996ರಲ್ಲಿ PWD ಕಾಯ್ದೆಯ ಸೆಕ್ಷನ್-66ನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಅನುಷ್ಠಾನಗೊಳಿಸಲು, ವಿಕಲಚೇತನರ ಪುನರ್ವಸತಿಗಾಗಿ ಆಗ ಜಾರಿಯಲ್ಲಿದ್ದ ನಾಲ್ಕು ಯೋಜನೆಗಳನ್ನು ಒಟ್ಟುಗೂಡಿಸಿ ಒಂದೇ ಸೂರಿನಡಿ ತಂದು ವಿಕಲಚೇತನ ವ್ಯಕ್ತಿಗಳಿಗೆ ಸಂಬಂಧಿಸಿದ ಸ್ವಯಂಸೇವ ಕಾರ್ಯಗಳ ಉತ್ತೇಜನಾ ಯೋಜನೆ ಎಂಬ ಯೋಜನೆಯನ್ನು ಜಾರಿಗೆ ತರಲಾಯಿತು. ತದನಂತರ 01-04-2003ರಲ್ಲಿ ಸಂಯೋಜಿತ ಯೋಜನೆಯು ಅಂದಿನ ಸಚಿವಾಲಯದಿಂದ ಪರಿಷ್ಕೃತಗೊಂಡು ದೀನ್ದಯಾಳ್ ವಿಕಲಚೇತನರ ಪುನರ್ವಸತಿ ಯೋಜನೆ DDRS ಎಂದು ಮರುನಾಮಕರಣಗೊಂಡಿತು. ಅದರೂ, 2003ರಲ್ಲಿ ವೆಚ್ಚದ ನೀತಿಯು ಪರಿಷ್ಕರಣೆಗೊಳ್ಳಲಿಲ್ಲ
DDRS ಯೋಜನೆ ಅಡಿಯಲ್ಲಿ NGOಗಳು ವಿಕಲಚೇತನ ವ್ಯಕ್ತಿಗಳಿಗೆ/ಮಕ್ಕಳಿಗೆ ವಿವಿಧ ಶ್ರೇಣಿಯ ಸೇವೆಗಳನ್ನು ಒದಗಿಸುತ್ತಿವೆ. ಉದಾಹರಣೆಗೆ,
  1. ಪೂರ್ವ ಪ್ರಾಥಮಿಕ ಶಿಕ್ಷಕರ ಮತ್ತು ಶೀಘ್ರ ಮದ್ಯಸ್ಥಿಕೆ/ನಿರ್ವಹಣೆ
  2. ವಿಶೇಷ ಶಿಕ್ಷಣ
  3. ಔದ್ಯೋಗಿಕ ತರಬೇತಿ ಮತ್ತು ಸ್ಥಳನಿಯೋಜನೆ
  4. ಸಮುದಾಯ ಆಧಾರಿತ ಪುನರ್ವಸತಿ
  5. ಮಾನವ ಸಂಪನ್ಮೂಲ ಅಭಿವೃದ್ಧಿ
  6. ಮಾನಸಿಕ ಅಸ್ವಸ್ಥ ವ್ಯಕ್ತಿಗಳ ಮಾನಸಿಕ-ಸಮಾಜಿಕ ಪುನರ್ವಸತಿ
  7. ಕುಷ್ಠ ರೋಗ ನಿವರಣೆಯಾದ ವ್ಯಕ್ತಿಗಳ ಪುನರ್ವಸತಿ

                                  ವಿಕಲಚೇತನರಿಗೆ ಅವಶ್ಯಕವಾದ ಸಾಧನ ಸಲಕರಣೆಗಳನ್ನು ಕೇಂದ್ರ ಸರ್ಕಾರದ ಮತ್ತೊಂದು ಯೋಜನೆಯಾದ ವಿಕಲಚೇತನ ವ್ಯಕ್ತಿಗೆ ಸಾಧನ ಸಕಲರಣೆಗಳ ಕೊಳ್ಳಲು/ಅಳವಡಿಸಲು ಸಹಾಯ ಯೋಜನೆ (Scheme of Assistance to Disabled Persons for Purchase/Fitting of Aids/Appliances-ADIP) ಯನ್ನು ತಂದಿದೆ.
      ಸ್ವಯಂಸೇವ ಸಂಘಟನೆಗಳು ನೀಡುವ ಹಲವು ಶ್ರೇಣಿಯ ಸೇವೆಗಳಿಗೆ ಆರ್ಥಿಕ ನೆರವನ್ನು ನೀಡಲು ಅವಶ್ಯಕವಾದ ಮಾದರಿ ಯೋಜನೆಗಳ ಮಾಹಿತಿಯನ್ನು DDRS ಮಾರ್ಗದರ್ಶಿಕೆಯು ಒಳಗೊಂಡಿರುತ್ತದೆ. ಮಾದರಿ ಯೋಜನೆಯು ಕೆಳಕಂಡ ಮಾಹಿತಿಯನ್ನು ಒಳಗೊಂಡಿರುತ್ತದೆ.
  1.       ಉದ್ದೇಶ, ಅಗತ್ಯಗಳ ಪೂರೈಕೆ, ವಿಕಲತೆಗೆ ವಿಧದ ಅನುಗುಣವಾಗಿ ನಿಗಧಿ ಪಡಿಸಿಕೊಂಡ ಗುಂಪುಗಳು ಮತ್ತು ವಯಸ್ಸು ಹಾಗೂ ಕನಿಷ್ಟ ಸಂಖ್ಯೆಯ ಫಲಾನುಭವಿಗಳ ಮಾಹಿತಿ.
  2. ಶಿಕ್ಷಕರು ಮತ್ತು ಫಲಾನುಭವಿಗಳ ಅನುಪಾತ (ಪೂರ್ವ ಪ್ರಾಥಮಿಕ ಮತ್ತು ವಿಶೇಷ ಶಾಲೆಗಳು)
  3. ವ್ಯಾಪರದ ಸಂಖ್ಯೆ ಮತ್ತು ವ್ಯಾಪಾರದ ಸಚಿತ್ರ ವಿವರಣೆ (ಔದ್ಯೋಗಿಕ ತರಬೇತಿಗಾಗಿ)
  4. ನಿರ್ದಿಷ್ಟ ಸಂಖ್ಯೆಯ ಫಲಾನೂಭವಿಗಳಿಗೆ ಲಭ್ಯವಿರುವ ಗರಿಷ್ಟ ಪ್ರಮಾಣದ ಆವರ್ತಕ ಮತ್ತು ಅವರ್ತಕವಲ್ಲದ ಸಹಾಯವನ್ನು ವೆಚ್ಚದ ಮಾದರಿ ರೂಪದಲ್ಲಿ ನೀಡಬೇಕು.

ಸಂಬಂಧಿತ ಮಾದರಿ ಯೋಜನೆಯಲ್ಲಿನ ವೆಚ್ಚದ ನಿಯಮಗಳಿಗೆ ಒಳಪಡುವಂತೆ ಇರುವುದು ಕಂಡುಬಂದರೆ ಯೋಜನಾ ವೆಚ್ಚದ ಶೇ.90% ವರೆಗಿನ ಅನುದಾನವನ್ನು ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ. ಎನ್.ಜಿ.ಒ.ಗಳಲ್ಲಿ ಸ್ವಾವಲಂಭನೆಯನ್ನು ಪ್ರೋತ್ಸಾಹಿಸುವ ಸಲುವಾಗಿ 2007-08ರಿಂದ ಅನ್ವಯವಾಗುವಂತೆ ಸಂಪೂರ್ಣ ಸ್ವೀಕಾರಾರ್ಹ ಯೋಜನೆಯ ವೆಚ್ಚದಲ್ಲಿ 5% ನಿಧಿಯನ್ನು ಪ್ರತಿ ಪರ್ಯಾಯ ವರ್ಷದಲ್ಲಿ ಅನುದಾನದಲ್ಲಿ ಕಡಿತ ಮಾಡಲಾಗುತ್ತಿದೆ.

ಉದ್ದೇಶಗಳು :

ಯೋಜನೆಯ ಉದ್ದೇಶಗಳೆಂದರೆ,
  1. ಸಮಾನ ಅವಕಾಶ, ಸಮಾನತೆ, ಸಮಾಜಿಕ ನ್ಯಾಯ ಮತ್ತು ವಿಕಲಚೇತನ ವ್ಯಕ್ತಿಗಳ ಸಬಲೀಕರಣವನ್ನು ಖಾತ್ರಿಗೊಳಿಸುವ ಪರಿಸರದ ನಿರ್ಮಾಣ.
  2. 1995 ಅಂಗವಿಕಲ ವ್ಯಕ್ತಿಗಳ ಅಧಿನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸ್ವಯಂ ಸೇವ ಸಂಘಟನೆಗಳ ಕಾರ್ಯವನ್ನು ಪ್ರೋತ್ಸಾಹಿಸುವುದು

                                                                                                                            ಮುಂದುವರೆಯುವುದು.....

D.Ed.SE.HI Hindi Question Papers