Saturday, 1 August 2015

DDRS ಯೋಜನೆಯ ಅಡಿಯಲ್ಲಿ ಈ ಕೆಳಗಿನ ಮಾದರಿ ಯೋಜನೆಗಳಿಗೆ ಬೆಂಬಲವನ್ನು ನೀಡಲಾಗುತ್ತದೆ

  1. ಪೂರ್ವ ಪ್ರಾಥಮಿಕ ಮತ್ತು ಶೀಘ್ರ ಮದ್ಯಸ್ಥಿಕೆ ಮತ್ತು ತರಬೇತಿಯ ಯೋಜನೆ:ಈ ಯೋಜನೆಯ ಮುಖ್ಯ ಉದ್ದೇಶವೆಂದರೆ, ಶಿಶುವನ್ನು ಶಾಲೆಗೆ ಸೇರಿಸುವ 6 ವರ್ಷಗಳ ಕಾಲದ ವರೆಗೂ ವಿಶೇಷ ಶಾಲೆಗಳಿಗೆ/ಮುಖ್ಯವಾಹಿನಿಯ ಶಾಲೆಗಳಿಗೆ ದಾಖಲಿಸಲು ಅಗತ್ಯವಾದ ಸಿದ್ದತೆಗಳನ್ನು ಮಾಡುವುದು. ಈ ಯೋಜನೆಯು ಥೇರಪಿ, ಡೆ ಕೇರ್ ಮತ್ತು  ಪೋಷಕರಿಗೆ ಸಲಹೆ ನೀಡುವ ಸೇವೆಗಳನ್ನು ಸಹ ನೀಡುತ್ತದೆ.
  2. ವಿಶೇಷ ಶಾಲೆ :ಬುದ್ದಿಮಾಂದ್ಯ ಮಕ್ಕಳ, ಶ್ರವಣದೋಷವುಳ್ಳ ಮಕ್ಕಳ ಮತ್ತು ದೃಷ್ಟಿದೋಷವುಳ್ಳ ಮಕ್ಕಳಿಗಾಗಿ ವಿಶೇಷ ಶಾಲೆಗಳ ಯೋಜನೆಯನ್ನು ಇದು ಬೆಂಬಲಿಸುತ್ತದೆ. ವಿಶೇಷ ಶಿಕ್ಷಣವು ಮಕ್ಕಳಲ್ಲಿ ಸಂವಹನ ಕೌಶಲ್ಯ ಮತ್ತು ಇತರೆ ಇಂದ್ರಿಯಗಳ ಸಾಮಾರ್ಥ್ಯ, ದೈನಂದಿನ ಕಾರ್ಯುಗಳನ್ನು ನಿರ್ವಹಿಸುವ ಕೌಶಲ್ಯ ಅಂತಿಮವಾಗಿ ಮುಖ್ಯವಾಹಿನಿ ಶಾಲೆಯಲ್ಲಿ ಸಮನ್ವಯಗೊಳಿಸುವುದು. ಈ ನಿಧಿಯಿಂದ ವಸತಿ ಸೌಲಭ್ಯವನ್ನು ಸಹ ಮಕ್ಕಳಿಗೆ ಒದಗಿಸಬಹುದು. ಚಲನವಲನ ದೋಷವುಳ್ಳವರಿಗೂ ಶಾಲೆಗಳನ್ನು ತೆರೆಯಲು ನಿಧಿಯನ್ನು ಇಡಲಾಗಿದೆ, ಆದರೆ ಮಾದರಿ ಯೋಜನೆ ಲಭ್ಯವಿರುವುದಿಲ್ಲ. 
  3. ಸೆರೆಬ್ರಲ್ ಪಾಲ್ಸಿ ಮಕ್ಕಳಿಗಾಗಿ ಯೋಜನೆ:ಈ ಯೋಜನೆಯ ಉದ್ದೇಶವು ವಿಶೇಷ ಶಾಲೆ ಯೋಜನೆಯಂತೆಯೇ ಇದೆ. ಮಗುವಿನ ವೈಯಕ್ತಿಕ ಥೆರಪಿ ಅಗತ್ಯತೆಗೆ ಅನುಗುಣವಾಗಿ ಹೆಚ್ಚು ಮಹತ್ವವನ್ನು ಇಲ್ಲಿ ಒದಗಿಸಲಾಗುತ್ತದೆ.
  4. ವೃತ್ತಿ ತರಬೇತಿ ಕೇಂದ್ರಗಳು :15-35 ವರ್ಷದ ಒಳಗಿನ ವಿಕಲಚೇತನ ವ್ಯಕ್ತಿಗಳಿಗಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ಈ ಗುಂಪಿನಲ್ಲಿ ಬರುವ ವಿಕಲಚೇತನ ವ್ಯಕ್ತಿಗಳಿಗೆ ಕೌಶಲ್ಯವನ್ನು ನೀಡಿ ಆರ್ಥಿಕವಾಗಿ ಶಕ್ತರನ್ನಾಗಿ ಮಾಡುವುದು ಇದರ ಉದ್ದೇಶ. ತರಬೇತಿಯ ಗರಿಷ್ಠ ಅವಧಿ ಮತ್ತು ವ್ಯಾಪಾರದ ವಿವರವನ್ನು ಒಳಗೊಂಡಿರುವ ಪಟ್ಟಿಯನ್ನು ಈಗಾಗಲೆ ಯೋಜನೆಯಲ್ಲಿ ಸೇರಿಸಲಾಗಿದೆ.
  5. Sheltered Workshop :ಈ ಯೋಜನೆಯ ಉದ್ದೇಶವು ವೃತ್ತಿ ತರಬೇತಿ ಕೇಂದ್ರಗಳಂತೆಯೇ ಇದೆ. ಆದರೆ ಈ ಯೋಜನೆಯಲ್ಲಿ ಅದಾಯದ ಉತ್ಪತಿಯ ಅವಕಾಶಗಳನ್ನು ಸೃಜಿಸುವುದರ ಮೇಲೆ ಹೆಚ್ಚು ಕೇಂದ್ರಿಕರಿಸಲಾಗಿರುತ್ತದೆ.
  6. ಕುಷ್ಠ ರೋಗ ನಿವಾರಣೆಯಾದ ವ್ಯಕ್ತಿಗಳ ಪುನರ್ವಸತಿ ಯೋಜನೆ:ಕುಷ್ಠ ರೋಗ ನಿವಾರಣೆಯಾದ ವ್ಯಕ್ತಿಗಳಿಗೆ ಕೌಶಲ್ಯವನ್ನು ಒದಗಿಸುವ ಮೂಲಕ ಅವರೆ ತಮ್ಮ ಆರ್ಥಿಕ-ಸಾಮಾಜಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುವಂತೆ ಮಾಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಈ ಯೋಜನೆಯು ವೃತ್ತಿ ತರಬೇತಿ ಘಟಕವನ್ನು ಮತ್ತು ತ್ರೀರ್ವತರನಾದ ವಿಕಲತೆಯನ್ನು ಹೊಂದಿರುವ ವ್ಯಕ್ತಿಗಳಿಗೆ ವಸತಿಯನ್ನು ನೀಡುವ ಅಂಶಗಳನ್ನೂ ಸಹ ಹೊಂದಿದೆ.
  7. ಚಿಕಿತ್ಸೆ ಪಡೆದ ಮತ್ತು ಹತೋಟಿಗೆ ಒಳಪಟ್ಟ ಮಾನಸಿ ಅಸ್ವಸ್ಥ ವ್ಯಕ್ತಿಗಳ ಮಾನಸಿಕ – ಸಮಾಜಿಕ ಪುನರ್ವಸತಿಗಾಗಿ Half Way Homeಗಳನ್ನು ತೆರೆಯುವುದು:ಮಾನಸಿಕ ಅಸ್ವಸ್ಥನಾಗಿ ಚಿಕಿತ್ಸೆ ಪಡೆದ ಮತ್ತು ಹತೋಟಿಗೆ ಒಳಪಟ್ಟು ಮಾನಸಿಕ ಆಸ್ಪತ್ರೆಯಿಂದ ಬಿಡುಗಡೆಯಾದ ವ್ಯಕ್ತಿಗಳಿಗೆ ಪುನರ್ವಸತಿಯನ್ನು ಮಾಡುವ ವ್ಯವಸ್ಥೆಯನ್ನು ರೂಪಿಸುವುದು ಈ ಯೋಜನೆಯ ಉದ್ದೇಶ. ಇಂತಹ ವ್ಯಕ್ತಿಗಳಿಗೆ ವೃತ್ತಿ ತರಬೇತಿಯನ್ನು ನೀಡುವ ಕಾರ್ಯವನ್ನು ಯೋಜನೆಯು ಹೊಂದಿದೆ. ಇಂತಹ ವ್ಯಕ್ತಿಗಳಿಗೆ ಮತ್ತು ಇವರ ಕುಟುಂಬ ವರ್ಗದವರಿಗೆ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿ ಮಾನಸಿಕ ಅಸ್ವಸ್ಥೆಯಿಂದ ವಿಮುಕ್ತಿ ಪಡೆದ ವ್ಯಕ್ತಿಯು ಮತ್ತೆ ಕುಟುಂಬ/ಸಮುದಾಯದ ಒಬ್ಬ ಸದಸ್ಯನಾಗುವಂತೆ ಮಾಡಲು ಯೋಜನೆಯನ್ನು ಹೊಂದಿದೆ. ಅಸ್ವಸ್ಥೆಗೆ ಸಂಬಂಧಿಸಿದಂತೆ ವೈದ್ಯಕೀಯ ಸಲಹೆ/ ಚಿಕಿತ್ಸೆಗಳಿಗೆ ತಗಲುವ ವೆಚ್ಚವನ್ನು ಸಹ ಈ ಯೋಜನೆ ಅಡಿಯಲ್ಲಿ ಬರಿಸಲಾಗುತ್ತದೆ.
  8. ಸಮೀಕ್ಷೆ, ಗುರುತಿಸುವಿಗೆ, ಜಾಗೃತಿ ಮತ್ತು ಸಂವೇದನೆಗೆ ಸಂಬಂಧಿಸಿದ ಯೋಜನೆ:ಈ ಯೋಜನೆಯು ವಿಕಲತೆಯಯನ್ನು ಗುರುತಿಸುವುದರೊಂದಿಗೆ, ಶೀರ್ಘ್ರ ಮದ್ಯಸ್ಥಿಕೆಯ ಮೂಲಕ ಜಾಗೃತಿ ಮೂಡಿಸುವುದು, ಪೋಷಕರು/ಪಾಲಕರುಗಳಿಗೆ ವಿಕಲಚೇತನ ವ್ಯಕ್ತಿಗಳ ಅವಶ್ಯಕತೆಗಳನ್ನು ಪೂರೈಸಲು ಸಂವೇದಿಕರಣಗೊಳಿಸುವುದು, ಸೂಕ್ತ ಪುನರ್ವಸತಿ ಕಾರ್ಯಕ್ರಮಗಳ ಬಗ್ಗೆ ಸೂಚಿಸುವುದು ಮತ್ತು ವಿಕಲತೆಯ ಕ್ಷೇತ್ರದಲ್ಲಿನ ಹೊಸ ಅಲೆಗಳ ಬಗ್ಗೆ ಸಂಶೋಧನೆಗಳನ್ನು ನಡೆಸುವುದನ್ನು ಪ್ರೋತ್ಸಾಹಿಸುವ ಉದ್ದೇಶಗಳನ್ನು ಹೊಂದಿದೆ.
  9. ಗೃಹ ಆಧಾರಿತ ಪುನರ್ವಸತಿ ಕಾರ್ಯಕ್ರಮ:ಮನೆಯ ಪರಿಸರದಲ್ಲಿ ವಿಕಲಚೇತನ ಮಕ್ಕಳಿಗೆ ಚಲನವಲನ ಕೌಶಲ್ಯ ನೀಡುವುದು, ಸಾಮಾನ್ಯ ಸಂವಹನ ಕೌಶಲ್ಯವನ್ನು ಬೆಳೆಸುವುದು, ದೈನಂದಿನ ಕಾರ್ಯಗಳನ್ನು ಮಾಡುವ ಕೌಶಲ್ಯದ ಬೆಳವಣಿಗೆ, ಮಕ್ಕಳ ಪೋಷಕರನ್ನು ತರಬೇತುಗೊಳಿಸುವುದು ಮತ್ತು ಸಂವೇದಿಗಳನ್ನಾಗಿ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
  10. ಸಮುದಾಯ ಆಧಾರಿತ ಪುನರ್ವಸತಿ ಯೋಜನೆ :ವಿಕಲಚೇತನ ವ್ಯಕ್ತಿಗಳಿಗೆ ತರಬೇತಿ ನೀಡುವುದು, ಪುನರ್ವಸತಿಗೊಳಿಸುವುದು ಮತ್ತು ತಮ್ಮ ಸಮುದಾಯದಲ್ಲಿ ಅವರು ಸಮನ್ವಯಗೊಳ್ಳುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ. ವಿಕಲಚೇತನರಿಗೆ ಸೇವೆಗಳು ದೊರಕದೆ ಇರುವ/ ಸೀಮಿತವಿರುವ ಪ್ರದೇಶಗಳಲ್ಲಿ, ಸಂಸ್ಥೆಯೇತರ ವ್ಯವಸ್ಥೆಗಳ ಮೂಲಕ ಪುನರ್ವಸತಿ ಸೇವೆಗಳು ದೊರಕುವಂತೆ ಮಾಡುವುದು ಇದರ ಉದ್ದೇಶ. ವಿಕಲಚೇತನ ವ್ಯಕ್ತಿಗಳ ಪೋಷಕರು, ಆರೋಗ್ಯ ಕಾರ್ಯಕರ್ತರು, ಸಮುದಾಯ ಕಾರ್ಯಕರ್ತರುಗಳ ಸಹಬಾಗಿತ್ವವನ್ನು ಸಾಧಿಸುವುದು ಇಲ್ಲಿ ಅತಿ ಮುಖ್ಯ. ಈ ಯೋಜನೆಗಳು ನಿರ್ದಿಷ್ಟವಾಗಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಸೂಕ್ತವಾಗಿವೆ.
  11. ಅಲ್ಪ ದೃಷ್ಠಿ ಕೇಂದ್ರಗಳಿಗಾಗಿ ಯೋಜನೆ:ಅಲ್ಪ ದೃಷ್ಠಿಯನ್ನು ಹೊಂದಿರುವ ವ್ಯಕ್ತಿಗಳಿಗೆ ವೈಧ್ಯಕೀಯ ಪುನರ್ವಸತಿ ಸೌಲಭ್ಯವನ್ನು ಈ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ. ಈ ಕೇಂದ್ರಗಳು ದೃಷ್ಠಿ ದೋಷವನ್ನು ಗುರುತಿಸುವ, ಮೌಲ್ಯಮಾಪನ ಮಾಡುವ, ಪುನರ್ವಸತಿ ಮತ್ತು ಸಲಹ ಸೇವೆಗಳನ್ನು ನೀಡುತ್ತವೆ. ಅಷ್ಟೆ ಅಲ್ಲದೆ, ಮಾರ್ಗದರ್ಶನ ಮಾಡುವ ಮತ್ತು ದೃಷ್ಠಿ ಸಾಮಾರ್ಥ್ಯ ಹೆಚ್ಚಿಸುವ ಮೂಲಕ ಅಲ್ಪ ದೃಷ್ಠಿದೋಷವನ್ನು ಹೊಂದಿರು ವ್ಯಕ್ತಿಗಳು ಗರಿಷ್ಠ ಪ್ರಮಾಣದಲ್ಲಿ ಶಕ್ತರಾಗುವಂತೆ ಮಾಡುವುದು.
  12. ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆ:ವಿಕಲಚೇತನರ ಪುನರ್ವಸತಿ ಕ್ಷೇತ್ರದಲ್ಲಿ ಸಂಪನ್ಮೂಲ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸಂಪನ್ಮೂಲಗಳ ಜಾಲವನ್ನು ನಿರ್ಮಿಸುವ ಹಾಗೂ ವಿಶೇಷ ಶಿಕ್ಷಣದಲ್ಲಿ ತರಬೇತಿಯನ್ನು ನೀಡುವ ಯೋಜನೆಗಳನ್ನು ಹೊಂದಿದೆ.
  13. ವಿಚಾರ ಸಂಕಿರಣ/ಕಾರ್ಯಗಾರ/ಗ್ರಾಮೀಣ ಪ್ರದೇಶಗಳಲ್ಲಿ ಶಿಬಿರ:ವಿಚಾರ ಸಂಕಿರಣ/ಕಾರ್ಯಗಾರ/ಗ್ರಾಮೀಣ ಪ್ರದೇಶಗಳಲ್ಲಿ ಶಿಬಿರಗಳಿಗಾಗಿ ಈ ಯೋಜನೆಯ ಅಡಿಯಲ್ಲಿ ಇಡಿಗಂಟನ್ನು ಇಡಲಾಗಿರುತ್ತದೆ.
  14. ವಿಕಲಚೇತನರಿಗಾಗಿ ಪರಿಸರ ಸ್ನೇಹಿ ಕಾರ್ಯಗಳು :ವಿಕಲಚೇತನ ವ್ಯಕ್ತಿಗಳು ತೋಟಗಾರಿಗೆ ಮಾಡುವುದು, ನರ್ಸರಿಗಳನ್ನು ನಿರ್ಮಿಸುವುದು ಮತ್ತು ಮರಗಳನ್ನು ನೆಡುವಂತಹ ಪರಿಸರ ಸ್ನೇಹಿ ಕಾರ್ಯಗಳನ್ನು ಈ ಯೋಜನೆಯು ಬೆಂಬಲಿಸುತ್ತದೆ.
  15. ಕಂಪ್ಯೂಟರ್ ನ್ನು ಕೊಳ್ಳಲು ಧನ ಸಹಾಯ:ಅಗತ್ಯತೆಗೆ ಅನುಗುಣವಾಗಿ ಸೂಕ್ತ ವಿನ್ಯಾಸದ ಕಂಪ್ಯೂಟರ್ ಗಳನ್ನು ಕೊಳ್ಳಲು ಈ ಯೋಜನೆಯು ಧನ ಸಹಾಯ ಮಾಡುತ್ತದೆ. DDRS ಯೋಜನೆಯಲ್ಲಿ ಬರುವ ಇತರೆ ಯೋಜನೆಗಳಿಗೂ ಕಂಪ್ಯೂಟರ್ ಕೊಳ್ಳಲು ಧನ ಸಹಾಯ ಮಾಡಲಾಗುತ್ತದೆ.
  16. ಕಟ್ಟಡಗಳ ನಿರ್ಮಾಣ:ತರಗತಿ ಕೊಠಡಿ, ವೃತ್ತಿ ತರಬೇತಿ/ಉದ್ಯೋಗ ಕೇಂದ್ರ ಮತ್ತು ವಸತಿ ನಿಲಯಗಳ ನಿರ್ಮಾಣವನ್ನು ಈ ಯೋಜನೆಯ ಅಡಿಯಲ್ಲಿ ಬೆಂಬಲಿಸಲಾಗುತ್ತದೆ.
  17. ಕಾನೂನು ಸಾಕ್ಷರತೆಗಾಗಿ ಯೋಜನೆ: (ಕಾನೂನು ಸಲಹೆ, ಕಾನೂನು ಸಾಧನ ಮತ್ತು ವಿಶ್ಲೇಷನೆ ಹಾಗೂ ಪ್ರಸ್ತುತ ಲಭ್ಯವಿರುವ ಕಾನೂನಿನ ಮೌಲ್ಯಮಾಪನ): ಈ ಮೇಲಿನ ವಿಷಯಗಳಿಗೆ ಸಂಬಂಧಿಸಿದಂತೆ, ಯೋಜನೆಯು ಗೌರವ ಧನ ರೂಪದಲ್ಲಿ ಅರೆ ಕಾನೂನು ತರಬೇತಿ ಪಡೆಯುತ್ತಿರುವವರಿಗೆ ನೀಡಲಾಗುತ್ತದೆ.
  18. ವಿಕಲಚೇತನರ ಜಿಲ್ಲಾ ಪುನರ್ವಸತಿ ಕೇಂದ್ರ:ಸರ್ಕಾರದಿಂದ ಪ್ರಾರಂಭವಾದ ವಿಕಲಚೇತನರ ಜಿಲ್ಲಾ ಪುನರ್ವಸತಿ ಕೇಂದ್ರಗಳು ಸ್ವಯಂ ಸೇವ ಸಂಘಟನೆಗಳಿಗೆ ವರ್ಗಾವಣೆಯಾದ ನಂತರ ಅವುಗಳ ಕಾರ್ಯವನ್ನು ಬೆಂಬಲಿಸುವುದು ಈ ಯೋಜನೆಯ ಉದ್ದೇಶ. ಈ ಕೆಂದ್ರಗಳು ಸಮುದಾಯದ ತಳ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸುವುದು, ಪುನರ್ವಸತಿ ಮತ್ತು ತರಬೇತಿ ನೀಡುವ ಕಾರ್ಯಗಳನ್ನು ನಿರ್ವಹಿಸುತ್ತದೆ.

                                                           ಮುಂದುವರೆಯುವುದು.....

No comments:

Post a Comment

D.Ed.SE.HI Hindi Question Papers